View My Stats

Thursday 8 November 2012

ಸ್ನೇಹಾನಾ-ದ್ವೇಷಾನಾ !?!


ನಾನು ಜಗಳ ಬೇಡವೆಂದೆ
ನೀನಾಗಲೆ ಕದನ ಘೋಷಣೆ ಮಾಡಿದ್ದೆ

ನೀನು ಕೊಟ್ಟ ಪ್ರತಿಯೊಂದು ಪೆಟ್ಟು
ಮಾಡಿತು ನನ್ನನ್ನು ಮೊದಿಲಿಗಿಂತ ಗಟ್ಟಿ

ನೀನು ಬಿಟ್ಟುಕೊಡಲ್ಲ
ನಾನೂ ಬಿಡಲಿಲ್ಲ



ನೀನು ನನಗೆ ಬೀಳಲು ಅವಕಾಶ ಕೊಡುವುದಿಲ್ಲ
ನಾನು ನಿನಗೆ ಗೆಲ್ಲಲು ಬಿಡುವುದಿಲ್ಲ..


ನೀನು ಹೇಳಿದಂತೆ.....,,

ನಮ್ಮಂತೆ ಯಾರೂ ಜಗಳ ಆಡಲಾರರು
ಸ್ನೇಹವನ್ನೂ ನಮ್ಮಂತೆ ಯಾರು ಮಾಡಲಾರರು

ನನ್ನ ಜೀವದ ಗೆಳತಿ,ಸಂತೋಷದ ಒಡತಿ :)

Sunday 24 June 2012

ಪೇಸ್-ಭೂಪತಿ ಕಲಹಕ್ಕೆ ಸಾನಿಯಾ ಕಾರಣ??


ಈ ಖಾಸಗಿ ನ್ಯೂಸ ವಾಹಿನಿಯರ ವರ್ತನೆಗೆ ಏನು ಹೇಳಬೇಕೊ ತಿಳಿಯದು, ತಮ್ಮ ರೇಟಿಂಗ್ ಗಳನ್ನು ಹೆಚ್ಚಿಸಿಕೊಳ್ಳುವ ನೆಪದಲ್ಲಿ ಅತ್ಯುನ್ನತ ವ್ಯಕ್ತಿಗಳನ್ನು ಪಾತಳಕ್ಕೆ ತಳ್ಳುವುದು ಅಂದರೆ ಏನರ್ಥ...

ನಿನ್ನೆ ಒಂದು ಕಾರ್ಯಕ್ರಮ ನೋಡಿದೆ, ಅದು ಪೇಸ್-ಭೂಪತಿ ಅವರ ನಡುವಿನ ದ್ವೇಷದ ಕುರಿತಾಗಿ.. ಈ ನ್ಯೂಸ ಮಹಾಶಯರು ಅದರ ರಹಸ್ಯ ಭೇದಿಸಲು ಹೊರಟರು, ಅವರು ಅದಕ್ಕೆ ಕೊಟ್ಟ ಒಂದೊಂದು ಕಾರಣಗಳೊ, ವ್ಹಾವ್ಹಾ :/ ಆ ದೇವರಿಗೆ ಪ್ರೀತಿ... ಪಕ್ಕಾ 'ಮಾಸ್'ಪದಗಳಾನ್ನು ಉಪಯೋಗಿಸಿಕೋಂಡು, ಜನರನ್ನು ಸೆಳೆದು ತಮ್ಮ ರೇಟಿಂಗ್ ಹೆಚ್ಚಿಸಿಕೋಂಡರು.. ಅವರು ಹೇಳಿದ ಕೆಲವೋಂದು ಅಂಶಗಳನ್ನು ಇಲ್ಲೆ ಬರೆಯುತ್ತಿದ್ದೇನೆ, ತಪ್ಪು ತಿಳಿಯಬೇಡಿ, ಇದು ಕೇವಲ ನಮ್ಮ ನ್ಯೂಸ್'ನವರ ಪ್ರಮಾಣವನ್ನು ತೋರಿಸಲು ಮತ್ತು ಯಾವ ಹಂತಕ್ಕೆ ಬೇಕಾದರೂ  ಇಳಿಯುತ್ತಾರೆ ಎಂದು ತೋರಿಸಲು...

             
                                                        **** " ಹೆಡ್ ಲೈನ್ " ****
                                     ಸಾನಿಯಾ ಮಿರ್ಜ ಅವರು ಪೇಸ್-ಭೂಪತಿ ಕಲಹಕ್ಕೆ ಕಾರಣ???

(ಅವರು ಹೇಳಿದ್ದು)
 * ಹೌದು, ಈ ಇಬ್ಬರ ದ್ವೇಷಕ್ಕೆ ಸಾನಿಯಾ ಅವರೇ ಪ್ರಮುಖ ಕಾರಣ
 * ಮಿಶ್ರಡಬಲ್ಸ್'ನಲ್ಲಿ ಯಾರ ಜೊತೆ ಸಾನಿಯ ಆಡಬೇಕು ಎಂಬುದರ ಕುರಿತು ಮನಸ್ಥಾಪವಾಯಿತು.
 * ಸಾನಿಯಾ ಅವರು ಭೂಪತಿ ಜೊತೆ ಆಡಿದ್ದಕ್ಕಾಗಿ ಪೇಸ್'ಗೆ ಭೂಪತಿ ಮೇಲೆ ಕೋಪ..
 * ಸಾನಿಯ ಅವರು ಅಂಕಣದಲ್ಲಿ ಆಟಕ್ಕಿಂತ, ಮೈಮಾಟ ತೋರಿಸಿವುದಕ್ಕಾಗಿಯೆ ಹೆಚ್ಚು ಹೆಸರು ಮಾಡಿದ್ದಾರೆ
 * ಪೇಸ್-ಭೂಪತಿ ಇಬ್ಬರೂ ಮಹಾರಸಿಕರು, ಅವರು ಸಾನಿಯಾ ಅವರ್ ಜೊತೆ ಆಡಲು ಹಾತೊರೆಯುತ್ತಿದ್ದರು..
 * ಸಾನಿಯ ಜೊತೆ ಆಡಿ ಅವರ ಸ್ನೇಹ ಬೆಳೇಸಿಕೊಂಡರೆ, ಅವರ ಜೊತೆ ದೇಶ-ವಿದೇಶ ಸುತ್ತಾಡಿ ಮಜಮಾಡಬಹುದು ಅಂತ ಯೋಚಿಸಿದ್ದರು (ಅಂದ್ರೆ ಸಾನಿಯ ಮಜಾ ಮಾಡುವ ವಸ್ತುವೆ?? ಛ್ಹಿ)
 * ಸಾನಿಯ ಅವರನ್ನು ಭೇಟಿ ಮಾಡುವುದಕ್ಕೋಸ್ಕರ ಒಬ್ಬರಿಗೊಬ್ಬರು ಸುಳ್ಳು ಹೇಳಿದ್ದರಂತೆ
 * ಸಾನಿಯ ಅವರು ಭೂಪತಿಯ ಬಳಿ, ಪೇಸ'ರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ , ಭೂಪತಿ ಪೇಸ್'ರ ಮೇಲೆ ಕೋಪಗೊಳ್ಳುವಂತೆ ಮಾಡಿದ್ದಾರಂತೆ..
 * ಇನ್ನೂ ಅವರಿಬ್ಬರ ವೈಯಕ್ತಿಕ ಜೀವನವನ್ನು ಇದಕ್ಕೆ ಎಳೆದು ತಂದಿದ್ದಾರೆ
 * ಅವರಿಬ್ಬರು ಕಾಮಾಪೇಕ್ಷಿಗಳು ಎಂಬರ್ಥದಲ್ಲಿ ಹೇಳಿ, ಅದಕ್ಕಾಗಿಯೆ ಎರಡೆರಡು ಮದುವೆ ಆಗಿದ್ದಾರೆ ಅಂತ ಹೇಳಿದರು
 * ಇನ್ನು ಅವರ ಹಳೆಯ ಪ್ರೇಮಿಗಳಾನ್ನೂ ಟಿವಿಯಲ್ಲಿ ತೋರಿಸಿ ಅವರಿಗೂ ಒಂದಷ್ಟು ಪ್ರಚಾರ ಕೊಟ್ಟರು..


ಅಲ್ಲ ಸ್ವಾಮಿ ಇವೆಲ್ಲದಕ್ಕೂ, ಈಗಿನ ಒಲಿಂಪಿಕ್ಸ್ ಕುರಿತಾದ ಸಮಸ್ಯೆಗೆ ಎಷ್ಟರಮಟ್ಟಿಗೆ ಸಂಬಂಧ ಇದೆ.. ಸ್ವಲ್ಪ ಪ್ರಮಾಣದಲ್ಲಿ ಇರಬಹುದು, ಆದ್ರೆ ಈ ರೀತಿಯೆಲ್ಲೆ ಟಿವಿಯಲ್ಲಿ ತೋರಿಸುವುದು ಸರಿಯಾ??
ಒಪ್ಪಿಕೊಳ್ಳೋಣ ಸಾನಿಯಮಿರ್ಜ ಅವರು ಪೇಸ್-ಭೂಪತಿಯವರ ನಡುವಿನ ಮನಸ್ಥಾಪಕ್ಕೆ ಬಾಗಶಃ(ಸಂಪೂರ್ಣ ಅಂತೂ ಅಲ್ಲವೇ ಅಲ್ಲ್) ಕಾರಣವಿರಬಹುದು, ಆದರೆ ಅದನ್ನು ಹೇಳುವುದಕೂ ಒಂದು ವಿಧಾನ ಇದೆ ಅಲ್ವಾ.. ಅದು ಬಿಟ್ಟು ಸಾನಿಯಾ ಅವರನ್ನು ಕೆಟ್ಟದಾಗಿ ಬಿಂಬಿಸಿ, ಅವರಿಬ್ಬರನ್ನು ವಿಲನ್'ಗಳನ್ನಾಗಿ ಮಾಡಲೇಬಾರದು... ಇವರೆಲ್ಲರೂ ನಮ್ಮ ಭಾರತದ ಕೀರ್ತಿಪತಾಕೆಯನ್ನು ಹಾರಿಸಿದವರು...
ನ್ಯೂಸ್ ಚಾನಲ್ಲಿನವರೇ.... ದಯವಿಟ್ಟು ಯಾಂತ್ರಿಕರಾಗಬೇಡಿ,  ಸತ್ಯವನ್ನು ತೋರಿಸಿ, ಆಗಲೂ ಜನ ಖಂಡಿತ ಮೆಚ್ಚುತ್ತಾರೆ.

Wednesday 6 June 2012

cleaner India


friends.. this is quite long one, but a very much worth, so if u spend few mins in reading this, true India well-wishers wont regret later, u do if u dint read this.... 




and u r free to pass coments....




India is dirty. The black plaster on my feet, socks, trousers and lungs is carcinogenic proof of that. Litter is the streets. Litter, and whatever else anyone caught short might feel like leaving behind by the side of the road. The fog that hangs within Delhi is chokingly evident, the revolting stench of open sewer is unavoidably oppressive, and the
crap that lines the pavement, literally crap sometimes, is just there.


And always there.


It’s quite common to see someone relieving themselves, both numbers, by the side of the road or rail. Where else do you go? There are no public toilets and most of the households, including those stacked three high on top of each other, have no access to running water. The streets and railways are the public lavatory. It’s common knowledge and the subject of many an Indian travelogue, but it’s sometimes taken just a little too literally by over-enthusiastic travellers.


Initial disbelief or disgust eventually leads to an acceptance. It’s their country after all. But, as with anyone wanting to blend in, this can present you with a dilemma. Just where exactly do they draw the line? And what exactly is within those lines? And who exactly do you have to pay to get the lines drawn (but that’s another story altogether).


An Australian girl on our bus was unfortunate enough to have found herself with sporadically urgent stomach problems on a fourteen-hour journey. She, quite admirably, would get off at the various five-minute stops to settle whatever intestinal disagreement she had, in full view of the bus and anyone who cared, or dared to be watching. This went on throughout the night until we arrived at one of the customary twenty-minute service stops. Here, she proceeded to go through the usual, but desperate motions of finding a bush, manoeuvring herself into position and engaging in whatever comes next. It was only then that she realised, not only was there a perfectly acceptable, and surprisingly clean toilet facility in the service station only ten metres away, but that she had just soiled the entrance to the only house within visible distance. The once proud owners of the service station, with its impeccable washroom, and almost certainly adjoining house as well, watched in confused anguish as the flustered woman scurried back onto the bus.


More than just a metaphorical line was crossed that night. I’m not sure whether the poor house cleaner would have paused to reflect on this, as she cursed those filthy westerners with their filthy habits.


But India is full of contradictions. The shower is, according to Hussein – the mini Maharaja of Udaipur – an Indian invention. Back in the days of the Raj the British were still only having baths once a week, most likely depending
on how clean their underpants were at the time. Indians religiously, quite literally religiously, wash themselves every morning without fail and this habit passed on to the British. The shower has clearly evolved, an Indian shower is often a bucket, but the concept still stands. Indians were astonished at how the British could bear to consider themselves ‘washed’ in a tub of their own dirty water. Yet, every day I see Indians scrub themselves ‘clean’ in effluent from ten thousand tubs of dirty water.


The sandwich and chai vendors, soup and samosa sellers, along with many others on the trains, do very good business. From as early as politely possible until the last few passengers are nodding off, the stuttering call of “Chai CHAI chai Chai!!”, or the howling “SamooOOOOOSa!” ring out through the carriage. The food and drink supply is endless but there is not a single rubbish bin in sight. That is, if you haven’t yet realised that the ‘bin’ is in fact the endless expanse of railway track and adjoining countryside racing past. I learnt to appreciate the merits of this
facility, inexcusable as it really is, on one journey in particular.


I knew that everyone else simply dropped their plastic cups and plates out the window, without even a first thought, but I just couldn’t do it. I was determined to show the rest of my small section of the carriage how possible it was not to litter. So, morally smug, I left my cup on the fold-down table in front, glancing critically at anyone disposing of their’s in an inappropriate manner. Words can’t do justice to the speed at which the wind, the wind I really should have expected travelling in a train with the windows open, snatched up the feeble plastic cup and spread a surprisingly large amount, considering I’d thought it finished, of cold tea across the carriage. I was fortunate enough to take most of the hit myself but the fallout area was still quite a generous one. I slightly stained the beautiful white trousers of one unlucky Sikh but he smiled and accepted my apology. Or he accepted that the enormous brown stain on my trousers was punishment
enough for this filthy westerner.


The sign outside Delhi’s Simri park reads the usual – “No Dogs after 5.30,” “No loud music,” “No ball games,” “No sticking of biles.” Whilst ‘Biles’ should probably be ‘bills’, or ‘advertising’, the sign is really far more
relevant in its mispelt form. Bile is not an easy substance to regurgitate, let alone stick to anything, but they give it a good go. There’s absolutely nothing more common, and less appealing than the sound of someone’s healthy, phlegm-raking spit. And there are some fine examples, with distance covered, volume, impact and rebound, all being
essential components.


Ali was our Agran rickshaw driver, who waited for us while we admired the Taj Mahal – that dazzlingly grand
world wonder. On our return, walking towards us, arms open in greeting, he produced such an incredibly impressive fountain of red betel-drenched saliva and spray (although it’s really much, much more than that), with such a magnificent, slow-motioned toss of the head, that the Taj visibly paled in comparison.


Indian dirt is too vast a topic to even touch on – Indians themselves don’t even sit down on the ground. They’ve developed a special do-it-anywhere squat that they’re capable of maintaining for hours as they work or wait, bottoms
hanging perilously close to a regurgitated dead rat or a suspiciously black stain of sorts.


It’s important to emphasise that India is very, very dirty, but Indians are not. In fact, Indians are some of the
best-groomed people I’ve ever seen, met or snuggled up to in a cold train carriage. No one smells. It may seem like a ridiculous comment to make, but it’s true. Out of interest, I’ve been almost predatory in my
search for an overly odorous Indian and I’ve yet to find one

Saturday 17 March 2012

Dr. Kalam sir - a visit to SDMCET dharwad


was at SDMCET where 'his Excellency Dr. A.P.J. Abdul Kalam Visited n did the honors of Launching of What Can I Give Mission Karnataka Chapter...

Wow...!! I cant believe my eyes..!! Saw Mr. Abdul Kalam in my own eyes... he is my role model.. Idol... Man of nation.. was called People's President during his presidential-ship...

That amazing 15 mins talk... i can never forget in my life ever... :)

APJ sir Started with.. " good evening my dear friends..... " and then went on and on and ooon... :) :)

Very excellent speech, applause all the way, cheerings.. Wow man.. it was just amazing Atmosphere...

I Like to share some of his thoughts about the youth of India, and some of the OATHs we took,,,, which he shared with us today here in SDMCET

*************************************************************

Instead of thinking "What can i give" to the nation, people will  jst think "What can i take" from the same.. :( this is wat the reason for lagging of India....

*************************************************************
Youth should think of Removing Corruption right from their home,... then we can see a beautiful India...

*************************************************************

#oath 1->  I'll make my mom smile
                 I'll make my mom smile
                 I'll make my mom smile
             
               If my mom smiles,            
                   Home will be happy.
              If Home is happy,,
                   Society will be happy
              If Society is happy
                   State will be happy..
              If State is happy,
                   INDIA will be happy
                   
                            :) :) :)

**************************************************************
smile =>
         
         Harmony in home =>
                 
                     Order in Nation =>
                           
                             Peace in the world :)

**************************************************************

#oath 2 ->

              I'm born with Potential

              I'm born with Goodness

              I'm born with Ideas n Born

              I'm born with Greatness

              I'm born with Wings.... :)


Am Not Meant For Crawling Because I've Wings....

               I'l Fly... I'l Fly... I'l Fly...


**************************************************************
#oath 3 -> I've Courage to think differently

                 I've Courage to Change Society

                 I've Courage to Invent

                 I've Courage to Travel to un-exploded places

                 I've Courage to Combat the Problem

                 I've Courage to Succeed
                     
        These are the Unique Qualities Of the Youth....

As the Youth of the Nation, I'll Wor with Courage to Suceed...

**************************************************************


hmmm thatz it for today... Short but Very Sharp words.. Inspiring Youth... wow.. Take a Bow Kalam ji... Hats off to you...




Friday 16 March 2012

ಸಚಿನ್=ಸಹಸ್ರ ಚಿನ್ನ


ನೂರು ಶತಕಗಳ ಸರದಾರ
ಸಚಿನ್ ರಮೇಶ್ ತೆಂಡುಲ್ಕರ

ನೂರು ನೂರುಗಳು
ಅಂತೂ ಇಂತೂ ಆಯಿತು
ಸಹಸ್ರ ಕೋಟಿ ಅಭಿಮಾನಿಗಳ
ಮನದ ಆಸೆ ತುಂಬಿತು

ಇವನು ಮಾಡಿದ ದಾಖಲೆಗಳಿಗೆ ಲೆಕ್ಕವೆಲ್ಲಿ
ಅವುಗಳನ್ನು ಮುರಿಯುವಂತ ಕಲಿ ಇನ್ನೆಲ್ಲಿ
ನಿನ್ನ ಅವಿಸ್ಮರಣೀಯ ಪಯಣ ಹೀಗೆ ಸಾಗುತಿರಲಿ
ನಿನ್ನಿಂದ ಕ್ರಿಕೆಟ್'ಗೆ ಇನ್ನಷ್ಟು ಕೊಡುಗೆ ಸಿಗಲಿ

Wednesday 14 March 2012

ಬಾಲ್ಯದ ಸೂರ್ಯಾಸ್ತ


ಇದು ಬಾಲ್ಯದ ನೆಚ್ಚಿನ ಆಟ
ಸುಂದರ ಸೂರ್ಯಾಸ್ತದ ನೋಟ
ಬಾಲಕನ ಹುಡುಗಾಟ
ಛಾಯಾಗ್ರಾಹಕನ ಕೈಚಳಕ


ಕತ್ತಲು ಬೆಳಕಿನ
ಕಣ್ಣಾಮುಚ್ಚಾಲೆ
ಕವನ ಬರೆಯಲು
ಸ್ಪೂರ್ತಿಯ ಸೆಲೆ

Friday 24 February 2012


ಹೇಗೆ ಸಾಬೀತು ಪಡಿಸಲಿ ನನ್ನ ಪ್ರೀತಿಯನ್ನ
ನಿನ್ನ ಮಾತುಗಳೇ ನನಗೆ ನೀರು-ಅನ್ನ
ನೀನು ಕೊಡಬಹುದು ಸಾರ್ಥಕತೆಯನ್ನ
ಪೂರ್ಣಗೊಳಿಸುತ್ತೀಯೇ ನನ್ನ ಜೀವನವನ್ನ...


ನೀನಿಲ್ಲದೆ ನನ್ನ ಅಸ್ಥಿತ್ವವಿಲ್ಲ
ನೀನೇ ನನಗೆ ಎಲ್ಲ
ಭಗವಂತನೇ ನಿನ್ನ ತೋರಿಸಿದನಲ್ಲ
ನಮ್ಮಿಬ್ಬರಿಗೆ ಕೊಟ್ಟ ಗ್ರೀನ್ ಸಿಗ್ನಲ್ಲ..

Monday 20 February 2012

ಕನ್ನಡವೇ ಸತ್ಯ ಚಿತ್ರ ನೋಡಿ-ಕವನ ಬರೆ- ೧೨

ಅಪ್ಪ-ಅಮ್ಮ ದುಡಿಯುತ್ತಿದ್ದಾರೆ ದಿನದ ರೂಪಾಯಿ
ನಾನು ಮಾಡುತ್ತೇನೆ ಕೈಲಾದ ಸಹಾಯ
ನಮಗೆ ಇಲ್ಲ ಭದ್ರ ಅಡಿಪಾಯ
ದೇವರಿದ್ದಾನೆ, ನಮಗಿಲ್ಲ ಅಪಾಯ


ಯುತ್ ಕಾಂಗ್ರೆಸ್'ನ ಪ್ರತಿಭಟನೆ...!!???


ಯುತ್ ಕಾಂಗ್ರೆಸ್'ನ ಪ್ರತಿಭಟನೆ...!!???

ಅಲ್ಲಾ ಸ್ವಾಮಿ ಇವರಿಗೇನು ಬೇರೆ ಕೆಲಸ ಇಲ್ವಾ... ಬಿಜೇಪಿಯವರೂ ಏನೆ ಮಾಡಿದರೂ ಇವರಿಗೆ ಸಹಿಸಲು ಆಗುವುದಿಲ್ಲ! ವಿರೋಧ ಪಕ್ಷ ಅಂದ ಮಾತ್ರಕ್ಕೆ, ಆಡಳಿತ ಪಕ್ಷ ಮಾಡುವ ಎಲ್ಲಾ ಕೆಲಸಗಳಿಗೆ ವಿರೋಧ ವ್ಯಕ್ತಪಡಿಸಿವುದು ಇವರ ಕೆಲಸವಲ್ಲ.. ಬಿಜೆಪಿಯವರು ಮಾಡುವುದು ತಪ್ಪೋ ಸರಿಯೋ ಅದು ಬೇರೆ ಮಾತು ಆದರೆ ಅದನ್ನು ವ್ಯಕ್ತಪಡಿಸಲು ಒಂದು ರೀತಿ ಇರುತ್ತದೆ ಅಲ್ಲವಾ..

ಈಗ ನೋಡಿ ಬಿಜೆಪಿಯ 'ಕೃಷ್ಣಯ್ಯ ಶೆಟ್ಟಿ' ಅವರ  ಗಂಗಾಜಲ ವಿತರಣೆ ಹಾಗು 'ಯಡಿಯೂರಪ್ಪ'ನವರ ಕಾಶಿ ಯಾತ್ರೆಯ ಬಗ್ಗೆ ಅಣಕ ಮಾಡುತ್ತಿದ್ದಾರೆ..

ಒಂದು ವಾಹನದ ಮೇಲೆ ಯಡಿಯೂರಪ್ಪನವರ ಭಾವಚಿತ್ರವನ್ನು ಇಟ್ಟು..ಕೃಷ್ಣಯ್ಯ ಶೆಟ್ಟಿ ಅವರ ವೇಷಧಾರಿಯೊಬ್ಬರು ಒಂದು ದೊಡ್ಡ ಬಿಸ್ಲೆರಿ ಡಬ್ಬಿಯನ್ನು ಹಿಡಿದುಕೊಂಡು ಯಡಿಯೂರಪ್ಪನವರ ಭಾವಚಿತ್ರದ ಮೇಲೆ ಮೇಲೆ ನೀರು ಸುರಿಯುತ್ತಿದ್ದಾರೆ..!

ಅವರ ವಾದವೇನು ಗೊತ್ತೆ.. ಕೃಷ್ಣಯ್ಯ ಶೆಟ್ಟಿ ಅವರು ಗಂಗಾಜಲವನ್ನು ಜನರಿಗೆ ಹಂಚಿ ಅದನ್ನು ಅಪವಿತ್ರಗೊಳಿಸುತ್ತಿದ್ದಾರಂತೆ... ಯಡಿಯೂರಪ್ಪನವರು ಅಷ್ಟು ದೂರದವರೆಗೆ ಹೋಗುವುದನ್ನು ಬಿಟ್ಟು ಕೃಷ್ಣಯ್ಯ ಶೆಟ್ಟಿ ಅವರ ಗಂಗಾಜಲದಲ್ಲಿ ಸ್ನಾನಮಾಡಿದರೆ ಸಾಕಾಗಿತ್ತಂತೆ..

ಇದೇನಾ ಅವರಲ್ಲಿರುವ ಪವಿತ್ರತೆ ಅಥವಾ ಇದೇನಾ ಅವರು ತೋರುವ ಗೌರವ ಶ್ರೀಕ್ಷೆತ್ರಕ್ಕೆ..??

ಇನ್ನು ಮುಂದಾಗಿ.. ಕರ್ನಾಟಕದಲ್ಲಿ ನೀರಿಗೆ ಬರವಂತೆ ಹಾಗಾಗಿ ಕೃಷ್ಣಯ್ಯ ಶೆಟ್ಟಿ ಅವರು ನೀರನ್ನು ಹಾಳುಮಾಡಬಾರದಂತೆ.. ಮೊದಲನೆಯದಾಗಿ ಒಂದು ಹನಿ ಗಂಗಾಜಲ ಹಂಚುವುದರಿಂದ ಕರ್ನಾಟಕದ ಜನರಿಗೆ ಏನು ನಷ್ಟವೋ ನಾ ಕಾಣೆ.. ಮೇಲಾಗಿ ಕರ್ನಾಟಕದಲ್ಲಿ ನೀರಿಲ್ಲ ನೀರಿಲ್ಲ ಎಂದುಕೊಂಡೆ ಇವರು ನೀರನ್ನು ಚೆಲ್ಲಿ ಹಾಳುಮಾಡುತ್ತಿದ್ದಾರಲ್ಲ.. ಏನು ಹೇಳಬೇಕು ಇವರಿಗೆ..???

''ಬೇರೆಯವರ್ ತಪ್ಪನ್ನು ಕಂಡುಹಿಡಿಯುವಲ್ಲಿ ನಾವು ಎಷ್ಟು ಸಮಯವನ್ನು ವ್ಯರ್ಥಮಾಡುತ್ತೇವೋ ಅದರ ಕಾಲುಭಾಗದಷ್ಟು ಸಮಯವನ್ನು ನಮ್ಮನ್ನು ನಾವು ತಿದ್ದಿಕೊಳ್ಳುವಲ್ಲಿ ಉಪಯೋಗಿಸಿಕೊಂಡರೆ ಜಗತ್ತಿನ್ನಲ್ಲಿ ಬಹಳಷ್ಟು ಒಳಿತನ್ನು ಕಾಣಬಹುದು...

Wednesday 15 February 2012

ಕನ್ನಡವೇ ಸತ್ಯ (ಚಿತ್ರ-11)


ಆಳಬೇಡ ತಂಗಿ ಅಳಬೇಡ
ಆದುದರ ನೆನೆದು ಮರುಗಬೇಡ
ಎಲ್ಲರಲ್ಲೂ ಇರುತ್ತದೆ ದುಃಖದ ಕಾರ್ಮೋಡ
ಭೂ-ಆಗಸದ ನಡುವೆ ಇರುವಂತೆ ಮೋಡ


ಮೀನಿಗೆ ನೀರು, ನೀರಿಗೆ ಮೀನು
ಇದ್ದಂತೆ,ನಿನಗೆ ನಾನು ನನಗೆ ನೀನು
ಬದುಕಿ ತೋರಿಸೋಣ
ಕಮ್ಮಿಯಿಲ್ಲನಾವು ಯಾರಿಗೇನು...

ಮೇಡಂ ಬೀಳ್ಕೊಡುಗೆ











ನಮ್ಮ ಮೇಡಂ (ಉಪ ವ್ಯವಸ್ಥಾಪಕರು:ಟ್ರೇನಿಂಗ್ ವಿಭಾಗ) ಇವರಿಗೆ ಬೇರೆ ನೌಕರಿ ಸಿಕ್ಕಿದ್ದರಿಂದ ಬೆಂಗಳೂರಿನೆಡೆಗೆ ಪ್ರಯಾಣ ಬೆಳೆಸಲಿದ್ದಾರೆ, ನಾವು ಇಂದು ಅವರಿಗೆ ಆತ್ಮೀಯವಾಗಿ ಬೀಳ್ಕೊಟ್ಟೆವು..ನಮ್ಮೆಲ್ಲರ ಮನಸಲ್ಲಿ ದುಃಖ ತುಂಬಿತ್ತಾದರೂ ನಾವೂ ನಗುನಗುತ್ತಲೆ ಬೀಳ್ಕೊಟ್ಟೆವು. ಅವರೂ    ನಮಗೆ ಯಾವ ವಿಷಯವನ್ನು ತೆಗೆದುಕೊಳ್ಳದಿದ್ದರೂ ನನಗೆ ತುಬ ಆತ್ಮೀಯವಾಗಿದ್ದರು.. ಅವರೂ ಸಹ ನನ್ನನ್ನು ಆತ್ಮೀಯವಾಗಿ ಕಾಣುತ್ತಿದ್ದರು


ನಾನು ಈ ಕಾಲೇಜಿಗೆ ಸೇರಲು ಪ್ರವೇಶ ಪರೀಕ್ಷೆ ಬರೆಯುವ ಮುನ್ನವೆ ನನಗೆ ಮೇಡಂ ಅವರ ಪರಿಚಯ ಆಗಿತ್ತು ಅಂತ ಹೇಳಲು ಹೆಮ್ಮೆಯಾಗುತ್ತದೆ. ಅವರು ನಮ್ಮ ಕುಟುಂಬದ ಸ್ನೇಹಿತರಿದ್ದಂತೆ.. ನನಗೆ ಅವರ ಮನೆಗೆ ಹೋಗುವ ಭಾಗ್ಯವೂ ಸಿಕ್ಕಿತ್ತು ಅದೂ ಪ್ರವೇಶ ಪರೀಕ್ಷೆಗೆ ಅರ್ಜಿ ಹಾಕುವ ಮುನ್ನವೇ :) ಆಗ ಅವರು ಈ ಕಾಲೇಜಿನ ಬಗ್ಗೆ, ಹಾಸ್ಟೆಲಿನ ಬಗ್ಗೆ ಹಾಗು ನಿಯಮಗಳ ಬಗ್ಗೆ ಮಾಹಿತಿ ನೀಡಿದ್ದರು. ಇದು ನನಗೆ ಆಯ್ಕೆಮಾಡಲು ಸಹಾಯ ಮಾಡಿತ್ತು ಹಾಗು ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿತ್ತು. ಇದೇ ಕಾರಣಕ್ಕೋ ಏನೊ ಅವರೆಂದರೆ ಅದೆಂತದೊ ಗೌರವಾನ್ವಿತ ಬಾಂಧವ್ಯ.

ಇವರು ನನ್ನ ಎಲ್ಲ ಕಷ್ಟಕಾಲದಲ್ಲೂ/ಸಹಾಯದ ಅವಶ್ಯಕತೆಯಿದ್ದಾಗ ಮಾರ್ಗದರ್ಶನ ನೀಡಿದ್ದಾರೆ. ಮತ್ತೊಂದು ಮುಖ್ಯವಾದ ವಿಷಯವಂದರೆ ಅವರ ಬಳಿ ಯಾರೇ ಹೋದರೂ ಅವರಿಗೆ ನಕಾರಾತ್ಮಕ ಪ್ರತಿಕ್ರಿಯೆ ಸಿಗುವುದಿಲ್ಲ :)

ಅದೇನೊ ಹೇಳುತ್ತಾರಲ್ಲ 'ಒಂದನ್ನು ಪಡೆಯಬೇಕಾದರೆ ಒಂದನ್ನು ತ್ಯಜಿಸಬೇಕು" ಇದನ್ನೆ ನಮ್ಮ ಮೇಡಂ ಮಾಡುತ್ತಿರುವುದು... ಅವರ ಭವಿಷ್ಯದ ಯೋಜನೆಗಳಿಗೆ ಶುಭವಾಗಲಿ.. ನಿಮ್ಮನ್ನು ತುಂಬಾ ಮಿಸ್-ಮಾಡಿಕೊಳ್ಳುತ್ತೇವೆ ಮೇಡಂ...


ಕೊನೆಯದಾಗಿ.. ಈ ಕಾರ್ಯಕ್ರಮ ಯಶಸ್ವಿಯಾಗಲು ಮುಖ್ಯ ಪಾತ್ರವಹಿಸಿದ ನನ್ನ ಒಲುಮೆಯ ಸ್ನೇಹಿತರಾದ ಗಿರಿ, ರೋಜೀನಾ,ಕ್ರಿಸ್ತೋಫರ್ ಮತ್ತು ನಮ್ಮ ತರಗತಿಯ ಮುಖ್ಯ-ಶಿಕ್ಷಕರಾದ 'ಕಣವಿ ಸರ್' ಅವರಿಗೆ ಹೃತ್ಪೂರ್ವಕ ದನ್ಯವಾದಗಳು..

Monday 13 February 2012

ಪ್ರೀತಿ


          ಪ್ರೀತಿ
=======================
ಮೋಜಿನ ಸಂಗತಿಯಲ್ಲ ಈ ಪ್ರೀತಿ
ಭಾವನೆಗಳ ಸಂಗಮವಾಗಬೇಕು ವಿಶೇಷ ರೀತಿ
ಪ್ರೀತಿ ಕುರುಡು ಎನ್ನುವುದು ಪ್ರತೀತಿ
ಪ್ರೀತಿಸುವವರು ಕುರುಡರಲ್ಲ ಇದು ನಿಜಸ್ಥಿತಿ


ನಮಗೆ ಅನ್ನಿಸುತ್ತದೆ 'ಇವಳು ಬೇಕು, ಇವಳು ಬೇಕು'
ಆದರೆ ದೇವರು ನಮಗೆ ಕೊಟ್ಟಿದ್ದಾನೆ
ನಾವು ಅದನ್ನು ಉಪಯೋಗಿಸಬೇಕು..?
ಅದೇ ಸಹನೆ,ಯೋಚನೆ..
ಹಳ್ಳಕ್ಕೆ ಬೀಳಬಾರದು ದುಡುಕಿ

ಕೆಲ ಸಮಯದ ನಂತರ
ನೀವು ಯೋಚನೆ ಮಾಡಿದರೆ
ನಾನು ಪ್ರೀತಿ ಮಾಡಿದ್ದೆ ಇಂತಿಪ..
ಆಗ ನಿಮಗಾಗಬಾರದು ಪಶ್ಛಾತಾಪ!

ಬದಲಾಗಿ ಸಾರ್ಥಕವೆನಿಸಿದರೆ
ಜೀವನ ಎಷ್ಟು ಸುಂದರ

ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಸಿ
ಪ್ರೀತಿಮಾಡುವ ಮುನ್ನ ಅನುಮಾನಿಸಿ
ಆದರೆ ಪ್ರೀತಿಯಲ್ಲಿ ಅನುಮಾನ ಬೇಡ

ಅಪ್ರಾಪ್ತ ಪ್ರೀತಿ??


ಒಂದು ವರ್ಷದ ಹಿಂದೆ
ನೀನೆ ನನ್ನ ಬಳಿ ಬಂದೆ
ಪ್ರೀತಿ-ಪ್ರೇಮ ಮಾಡೋಣ ಅಂದೆ
ನಾನು:ಈಗಲೇ ಇದೆಲ್ಲ ಬೇಡವೆಂದೆ
ನೀನಂದೆ
"ನಿನ್ನ ಬಿಟ್ಟು ಬೇರಾರಿಗೂ ನೀಡುವುದಿಲ್ಲ
ಕುತ್ತಿಗೆ,! ತಾಳಿ ಕಟ್ಟಲು..
ನೀನು ಇಲ್ಲ ಅಂದರೆ
ನಾನು ಜೀವಂತ ಉಳಿಯುವುದಿಲ್ಲ
ನಿನ್ನ ಜೊತೆ ಮಾತನಾಡಲು.."
ನೀ ಆಡಿದೆ ಈ ಪರಿ
ನನಗೆ ಆಯಿತು ಗಾಬರಿ!
ನನಗೆ ಗೊತ್ತಿಲದೆಯೇ ಒಪ್ಪಿಕೊಂಡೆ
ಹುಚ್ಛು ಪ್ರೀತಿಗೆ ಜಾರಿಕೊಂಡೆ
ಪ್ರೀತಿಸಲು ಹೋಗಿ ನನ್ನ ಅಸ್ತಿತ್ವ ಕಳೆದುಕೊಂಡೆ
ಅಮ್ಮನ ಹತ್ರ ಬೈಸಿಕೊಂಡೆ






ಆದರೆ ಆಮೇಲೇನಾಯಿತು ನಿನಗೆ?
ಯಾಕೆ ದೂರಮಾಡಿದೆ ನನ್ನನ್ನು...
ಕಾರಣವನ್ನೂ ಕೊಡದೇ..
"ದೂರ ಹೋಗು..ದೂರ ಹೋಗು"
ಎಂದು ಹೊರದಬ್ಬಿದೆಯಲ್ಲ...
ನಾನೇನು ಮಾಡಿದ್ದೆ ನಿನಗೆ?
೨-೩ ತಿಂಗಳ ನಂತರವೆ
ನಾನು ನಿನ್ನನ್ನು ಸಂಪೂರ್ಣ ಮರೆತಿರುವೆ
ಈಗೇಕೆ ಹಿಂದೆ ಹಿಂದೆ ಬರುತ್ತಿರುವೆ??
ನನ್ನ ಪ್ರಾಣ ಹಿಂಡುತ್ತಿರುವೆ..
ಅಮ್ಮನ ಮಾತನ್ನೂ ನಿರ್ಲಕ್ಷಿಸಿ
ನೋವನ್ನು ಅನುಭವಿಸಿ
ಹುಚ್ಚನಂತೆ ನಿನ್ನನ್ನು ಪ್ರೀತಿಸಿ
ನನ್ನ ಭವಿಷ್ಯವನ್ನು ಕೆಡಿಸಿಕೊಂಡೆನಲ್ಲ....
ನಿನ್ನನ್ನು ತುಂಬಾ ನಂಬಿದ್ದೆ
ನಿನ್ನ ಬಗ್ಗೆ ತಿಳಿಯದೆ
ಹೌದು ತಪ್ಪೆಲ್ಲಾ ನನ್ನದೆ
ನಿನ್ನನ್ನು ದೂರಿ ಪ್ರಯೋಜನವೇನಿದೆ..
ಸ್ನೇಹಿತರೆ.. ಮೊದಲ ಬಾರಿಗೆ ಉದ್ದದ ಕವನವನ್ನು ಪ್ರಯತ್ನಿಸಿದ್ದೇನೆ ಅದೂ ನನ್ನ ಜೀವನದ ನೈಜ ಘಟನೆಯೊಂದಿಗೆ...
                
ಸಲಹೆ-ಸೂಚನೆಗಳನ್ನು ನೀಡಿ ಸಹಕರಿಸಿ, ಪ್ರೋತ್ಸಾಹಿಸಿ....
                                                           
                                                                    -ಶಿಶಿರ್

Friday 10 February 2012

ಮನುಷ್ಯ.. ನೀನ್ಯಾಕೆ ಹೀಗೆ??









ಜಗತ್ತನ್ನು ಅರಿಯುವ ಮುನ್ನವೆ
ಮಣ್ಣಿಗೆ ಸೇರಿದವೇ!
ಮಕ್ಕಳನ್ನು ಹಿಸುಕಿಹಾಕಿದೆಯಾ
ನಿನಗೆ ಮನುಷ್ಯತ್ವ ಇಲ್ಲವೇನಯ್ಯಾ

ಕೇವಲ ನೀನು ಬದುಕಿದರೆ ಸಾಕೇ??
ಮುಗ್ಧರನ್ನು ಬಲಿಕೊಟ್ಟೆಯಾ ನಿನ್ನ ಸ್ವಾರ್ಥಕ್ಕೆ??
ನಿನ್ನ ಪ್ರಾಣವನ್ನು ಬಲಿಕೊಡಲಿಲ್ಲ ಏಕೆ?
ಮಕ್ಕಳು ದೇವರ ಸಮಾನ.. ಜೋಕೆ!!


[ಚಿತ್ರ: ಮಂಜುನಾಥ ರೆಡ್ಡಿ,(ದನ್ಯವಾದಗಳು ಸರ್)]

Tuesday 7 February 2012

ಸದನದಲ್ಲಿ ಕಾಮಾಯಣ


ಛೀ...ಛೀ...ಛೀ....

ಇದಕ್ಕಿಂತ ಅಸಹ್ಯವಾದ ವಿಷಯ ಬಹುಶಹ ಇರಲಿಕ್ಕಿಲ್ಲ....

ಸದನದಲ್ಲಿ ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತಿಸುವಾಗ, ಕಾಮವನ್ನು ವೀಕ್ಷಿಸುವುದೆ..??
ಛೆ..ಹೇಳಲೂ ಅಸಹ್ಯವಾಗುತ್ತದೆ.. ಬಿಜೆಪಿ ಪಕ್ಷದ ನೈತಿಕತೆ ಎಲ್ಲಿ ಹೋಯಿತು???
ಬಿಜೆಪಿ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿದ್ದೆವಲ್ಲ ಅವರ ಚಪ್ಪಲಿಯಿಂದ ನಮಗೆ ನಾವೆ ಹೊಡೆದುಕೊಳ್ಳಬೇಕು ಎನ್ನುವಂತಹ ಭಾವ ಕಾಡುತ್ತಿದೆ..
ಅವರಿಗೆ ಅಷ್ಟೊಂದು ದುರಹಂಕಾರವೆ??? ಅವರು ಏನು ಮಾಡಿದಾರೂ ಕರ್ನಾಟಕದ ಜನತೆ ಕ್ಷಮಿಸುತ್ತಾರೆ ಅಂತಲೇ?? ಅಥವಾ ಹಿರಿಯಣ್ಣರ 'ಸಾಥ್' ಇದೆ ಅಂತ .??

ಇಂತಹ ಘಟನೆ ನಡೆಯುವುದರಿಂದ ಅವರಿಗೆ ಕೆಟ್ಟ ಹೆಸರು ಬರುವುದಲ್ಲದೆ.. ಕರ್ನಾಟಕ ರಾಜ್ಯಕ್ಕೆ , ರಾಜ್ಯದ ಜನತೆಗೆ ಸಹ ಕೆಟ್ಟ ಹೆಸರು.. ಅಲ್ಲ ಸ್ವಾಮಿ.. ರಾಜ್ಯ ಅಥವಾ ರಾಜ್ಯದ ಜನತೆ ಏನು ತಪ್ಪು ಮಾಡಿದೆ ಅಂತ.. ಎಲ್ಲೊ ಕೆಲವು ಜನ ಮಾಡುವ ಘೋರ ತಪ್ಪುಗಳಿಂದ ವಿಶ್ವ ಮಟ್ಟದಲ್ಲಿ ಇಡೀ ರಾಜ್ಯಕ್ಕೆ ಕಪ್ಪು ಮಸಿ.. :(

ಇದಕ್ಕೆ ಪರಿಹಾರ ಏಕೆ ಇಲ್ಲ..?? ಕೆಲವು ಸಂದರ್ಭದಲ್ಲಿ ಆರೋಪಿ ಶಾಸಕರಿಗೆ ಅವರ ಹುದ್ದೆಯಲ್ಲಿ 'ಬಡ್ತಿ" ನೀಡಿದ ಉದಾಹರಣೆಯೂ ಇದೆ ಅಂದರೆ ಎಷ್ಟರ ಮಟ್ಟಿಗೆ ವ್ಯವಸ್ಥೆ ಕೆಟ್ಟಿದೆ ಅಂತ ಊಹಿಸಬಹುದು..
ಇಂದು ನಡೆದ ಘಟನೆಯಂತೂ ರಾಜ್ಯದ ಇತಿಹಾಸದಲ್ಲಿ ಅತಿ ದೊಡ್ಡ  ದುರಂತ.. ಇದಕ್ಕೂ ಏನು ಕ್ರಮ ಕೈಗೋಂಡಿಲ್ಲ ಅಂತ ಆದರೆ, ಇದಕ್ಕೆ ಪರಿಹಾರ ದೇವರೆ ಬಲ್ಲ...

ಇನ್ನು ಶಿಕ್ಷೆ ನೀಡಿದರೂ ಸಹ ಅದು ಎಷ್ಟರಮಟ್ಟಿಗೆ ಇರುತ್ತದೆ ಅಂದರೆ ಅವರ ಕೂದಲು ಸಹ ಅಲುಗಾಡುವುದಿಲ್ಲ.. ಹೆಚ್ಚೆಂದರೆ ಅವರನ್ನು ಹುದ್ದೆಯಿಂದ ತೆಗೆದು ಹಾಕಬಹುದು... ಇದರಿಂದ ಪ್ರಯೋಜನವೇನು, ಅವರಿಗೆ ತಪ್ಪಿನ ಅರಿವಾಗುವುದಿಲ್ಲ..ಮುಂದಿನ ಸಂಪುಟದಲ್ಲಿ ಮೊದಿಲಿಗಿಂತ ಹೆಚ್ಚಿನ ಹುದ್ದೆ ನೀಡಿ ನ್ಯಾಯ,ನೀತಿಗೆ ಕೊಡಲಿ ಪೆಟ್ಟು ಕೊಡುತ್ತಾರೆ..

ಇಂತಹ ಘಟನೆಗಳ ಬಗೆ ಸರಿಯಾದ ಕ್ರಮ ಕೈಗೊಳ್ಳದೇ ಇದ್ದರೆ ರಾಜ್ಯದ ಜನತೆಯೇ ಪಾಠ ಕಲಿಸುವುದರಲ್ಲಿ ಯಾವುದೆ ಅನುಮಾನವಿಲ್ಲ...


ಇನ್ನು ಸಿ.ಸಿ.ಪಾಟಿಲ್ ಅವರು ಕೊಟ್ಟ ಸಮಜಾಯಶಿ...

ಸಚಿವ ಸವದಿ ಅವರ ಮೊಬೈಲಿಗೆ 'ಬ್ಲೂಟೂತ್' ಮೂಲಕ ಸಂದೇಶವೊಂದು ಬರುತ್ತದೆ. ಅದರಲ್ಲಿ 'ರೆವುಯಿಸಂ' ಬಗ್ಗೆ ವರದಿ ಇತ್ತು. 'ಇರಾನ್' ದೇಶದಲ್ಲಿ ನಡೆದ ಅತ್ಯಾಚರ ಹಾಗೂ ಅತ್ಯಾಚಾರವೆಸಗಿದ ೭ ಜನರನ್ನು ಬಂಧಿಸಿದರ ಬಗ್ಗೆ ವರದಿ ಬಂದಿತ್ತು.. ಅವರು ಅದನ್ನು ನೋಡುತ್ತಿದ್ದರು, 'ಇಂತದ್ದನ್ನೆಲ್ಲ ಸದನದಲ್ಲಿ ನೋಡಬೇಡಿ' ಅಂತ ಹೇಳಿ ಬಂದುಮಾಡಿಸಿದೆ ಅಂತ ಮಾನ್ಯ್ ಪಾಟೀಲರು ಹೇಳುತ್ತಾರೆ!!
ಖಾಸಗಿ ವಾಹಿನಿಯೊಂದು ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸುತ್ತ್ತಾರೆ...'ಬೇರೆ ವಾಹಿನಿಯಲ್ಲಿ ನೋಡಿ ಅದರಲ್ಲಿ ನಾನು ಮೊಬೈಲ್ ಬಂದುಮಾಡಿಸಿದ ದೃಶ್ಯಗಳು ಪ್ರಸಾರವಾಗುತ್ತಿದೆ ಹಾಗಾಗಿ ಇದು ಸತ್ಯಕ್ಕೆ ದೂರವಾದದು..' ಇಷ್ಟೊಂದು ಬೇಜಾವಾಬ್ದಾರಿತನವೇ??? ಅಲ್ಲ ಅವರು ಏನು ಹೇಳುತ್ತಿದ್ದಾರೆಂದು ಅವರಿಗಾದರು ಗೊತ್ತಿದ್ಯಾ??? ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಬೇರೆ ಯಾವುದೊ ದೇಶದ ಹೆಸರು ಕೆಡಿಸುವುದು ಎಷ್ಟು ಸರಿ, ಅಥವಾ 'ಅತ್ಯಾಚಾರ' ಎಂಬತಹ ವಿಷಯವ ಅವರ ಬಾಯಲ್ಲಿ ಬಂದಿರಬೇಕಾದರೆ ಅವರ ಮನಸ್ಥಿತಿ ಎಂತದು ಎಂದು ತಿಳಿದುಬರುತ್ತದೆ


ಯಾವಾಗ ಬುದ್ಧಿ ಕಲಿಯುತ್ತಾರೊ?? ನಮಗೆ ಯಾವಾಗ ಸುಯೋಗ ಬರುತ್ತದೆಯೊ???

Monday 30 January 2012


ನಿನ್ನ ಸನಿಹ ಬಯಸಿ ಬಂದೆ ನಾ
ನಿಂತೆ ಸಾಲಿನಲ್ಲಿ ನಿನ್ನ ಕಾಣಲು
ಬಂದಿತ್ತು ನನ್ನ ಸರದಿ...
ಮೈ ಮರೆತೆ ನಿನ್ನಾನಂದವ ನೋಡುತ
ನೀ ನಡೆದೆ ನಿನ್ನ ಸಂಗಾತಿಯ ಅರೆಸಿ,
ನನ್ನ ದೂಡುತ..
ಈ ಪುಟ್ಟ ಹೃದಯ ಚೂರು ಮಾಡುತ..

Friday 20 January 2012

ನನ್ನ 'ಜೀವ'ವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೊ ಚಾಲಕ :)




ಆಟೊ ಚಾಲಕರ ಬಗ್ಗೆ ಹೀಗೆಳೆಯುವವರೆ ಜಾಸ್ತಿ. ಸುಲಿಗೆ ಮಾಡುತ್ತಾರೆ,ಒರಟಾಗಿ ನಡೆದುಕೊಳ್ಳುತ್ತಾರೆ, ಹಾಗೆ ಹೀಗೆ ಎಂದು... ಆದರೆ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳು ಇದನ್ನು ಸುಳ್ಳು ಎಂದು ಸಾರಿ ಸಾರಿ ಹೇಳುತ್ತಿವೆ.. ಬೆಂಗಳೂರಿನಲ್ಲಿ ಆಟೊ ಚಾಲಕನೊಬ್ಬ ಐದು ಲಕ್ಷ ರೂಪಾಯಿಗಳನ್ನು ಹಿಂದಿರುಗುಸುದ್ದನ್ನು ಕೇಳಿ ಮನತುಂಬಿ ಬಂತು.. ಅದೂ ನಗದು ಹಣವನ್ನು... ಹ್ಯಾಟ್ಸ್ ಆಫ್ಹ್...

ಈಗ ನನ್ನ ವಿಷಯಕ್ಕೆ ಬರೋಣ.. ನನಗೆ ಜೀವಕ್ಕಿಂತಲೂ ಹೆಚ್ಚಾಗಿದ್ದ ಮೊಬೈಲ್ ಫೋನನ್ನು ಆಟೊದಲ್ಲಿ ಕಳೆದುಕೊಂಡು ಮರುಕ್ಷಣದಲ್ಲೆ ಅದು ಸಿಕ್ಕಿತು... ಒಂದುಸಲ ಜೀವ ಹೋಗಿ ಬಂದಂತಾಯಿತು..

ಗೆಳತಿಯ ಗಿಫ್ಟ್..
ಈ ಮೊಬೈಲ್ ದುಡ್ಡಿನ ಲೆಕ್ಕಾಚಾರದಲ್ಲಿ ಅಂತಹ ತುಟ್ಟಿಯದೇನಲ್ಲ. ಎರಡು ಸಾವಿರದ ಒಳಗಿನದೇ.. ಆದರೆ ನನಗೆ ಇದು ಹೃದಯಕ್ಕೆ ಬಹಳ ಹತ್ತಿರವಾದದ್ದು.. ಕಾರಣ..??

ನನ್ನ ಜೀವದ ಗೆಳತಿಯ ಬಗ್ಗೆ ಈ ಹಿಂದೆ ಹೇಳಿದ್ದೆ, ನೆನಪಿರಬಹುದು...  ಹಂ... ಅವಳೆ ಈ ಮೊಬೈಲನ್ನು ನನ್ನ ಜನ್ಮದಿನದಂದು ಕೊಡುಗೆಯಾಗಿ ನೀಡಿದ್ದಳು... ಹಾಗಾಗಿ ಇದು ನನಗೆ ಜೀವನದಲ್ಲಿ ಇದುವರೆಗಿನ ಅತ್ಯಮೂಲ್ಯ ವಸ್ತು..



ಇವತ್ತು (೨೦ / ೧ / ೨೦೧೨) ರಾತ್ರಿ ೮:೩೦ರ ಸುಮಾರಿಗೆ ನಾನು ತಂದೆಯೊಂದಿಗೆ, ನನ್ನ ಅತ್ತೆಯನ್ನು ಪಿಕ್ ಮಾಡಲು ಬಸ್ ಸ್ಟ್ಯಾಂಡಿನ ಕಡೆ ಹೋಗಿದ್ದೆ... ವಾಪಸ್ ಬರುವಾಗ ಆಟೊದಲ್ಲಿ ಹೊರಟ್ವಿ. ದಾರಿಮಧ್ಯದಲ್ಲಿ ನನ್ನ ಮೊಬೈಲ್ ಫ್ಹೋನು ಆಟೊದಲ್ಲೆ ಎಲ್ಲೋ ಬಿದ್ದು ಹೋಗಿದೆ, ನನಗೆ ಗೊತ್ತಗಲಿಲ್ಲ..ಆಮೇಲೆ ಮನೆಗೆ ಬಂದ ನಂತರ ನನ್ನ ಪ್ಯಾಂಟಿನ ಕಿಸೆಯನ್ನು ತಡಕಾಡಿದರೂ ನನ್ನ ಮೊಬೈಲ್ ಸಿಗಲಿಲ್ಲ..ನನಗೆ ಆಕಾಶವೇ ಕಳಚಿ ಬಿದ್ದಂತಾಯಿತು.. ಏನು ಮಾಡಬೇಕೊ ತಿಳಿಯಲಿಲ್ಲ.. ನನ್ನ ದುರದೃಷ್ಟಕ್ಕೆ ಆ ಮೊಬೈಲ್ 'ಮನಮೋಹನ್ ಸಿಂಗ್' ಮೋಡ್ ಅಲ್ಲಿ ಇತ್ತು.. ಕೇವಲ ಲೈಟ್ ಬರುತಿತ್ತು ಅಷ್ಟೆ..ಕಂಪನ ಕೂಡ ಆಗುತ್ತಿರಲಿಲ್ಲ..

    ಪ್ರಯತ್ನ ಮಾಡಲೇಬೇಕು ಅಂತ ಮತ್ತೆ ತಿರುಗಿ ಬಸ್ ಸ್ಟ್ಯಾಂಡ್ ಕಡೆ ಹೊರಟೆ ಆ ಆಟೊವನ್ನು ಹುಡುಕಲು.. ನಾನು ನನ್ನ ಇನ್ನೊಂದು ಮೊಬೈಲಿನಿಂದ ಈ ಮೊಬೈಲಿಗೆ ನಿರಂತರವಾಗಿ ಕರೆ ಮಾಡುತ್ತಿದ್ದೆ, ಆದರೆ ಅದು ಪ್ರಯೋಜನ ಇಲ್ಲ ಅಂತ ಅನ್ನಿಸತೊಡಗಿತು..

    ಅದೇ ಸಮಯದಲ್ಲಿ ನನ್ನ ಅಮ್ಮನ ಮೊಬೈಲಿಗೆ ಒಂದು ಅಜ್ನಾತ ಕರೆ ಬಂತು. ಆ ಕಡೆಯಿಂದ ಮಾತನಾಡಿದ ಆ ಪುಣ್ಯಾತ್ಮ ಕೇಳಿದ.. "ನಿಮ್ಮ ಮಗ ಮೊಬೈಲ್ ಕಳೆದುಕೊಂಡಿದ್ದಾನೆಯೆ??" ಅಂತ ಕೇಳಿದ.. ಅದನ್ನು ಕೇಳುತ್ತಿದ್ದಂತೆಯೆ ನಾನು ದಡಬಡಸಿ ಅಮ್ಮನ ಫೋನ್ ತೆಗೆದುಕೊಂಡು ಮಾತಾಡಿದೆ, ಆಗ ಅವನು ಹೇಳಿದ್ದೇನು ಗೊತ್ತೆ..?? "ಸರ್ ಸುರಕ್ಷಿತವಾಗಿ ಇಟ್ಟುಕೊಳ್ಳಲು ಆಗುವುದಿಲ್ಲವೆ??, ಅದನ್ನು ನಿಮ್ಮ ಮನೆಗೆ ತಲುಪಿಸುತ್ತೇನೆ" ಎಂದು ಹೇಳಿದ ಐದು ನಿಮಿಶದಲ್ಲೆ ಮನೆ ಎದುರಿಗೆ ನನ್ನ ಮೊಬೈಲಿನೊಂದಿಗೆ ಹಾಜರ್..!! ನನಗೆ ಹೃದಯ ಬಾಯಿಗೆ ಬಂದು ಹೋದಂತೆ ಆಗಿತ್ತು.. ಹೇಗೆ ಪ್ರತಿಕ್ರಿಯಿಸಬೇಕೊ ತಿಳಿಯಲಿಲ್ಲ.. ಹಾಗೆ ಒಳಗೆ ಬಂದೆ.. ಮೊದಲು ನನ್ನ ಗೆಳತಿಗೆ ಸಂದೇಶ ಕಳಿಸಿದೆ...



ಅಣ್ಣಾ... ನಿಮಗೆ ಎಷ್ಟು ದನ್ಯವಾದ ಹೇಳಿದರೂ ಸಾಲದು... ನಿಮ್ಮ ಉಪಕಾರ ಎಂದಿಗೂ ಮರೆಯುವುದಿಲ್ಲ, ನಿಮಗೆ ಚಿರರುಣಿ... :)


ದೇವರ ಜೊತೆ ಒಂದು ಮುಂಜಾನೆಯ ಚರ್ಚೆ


ದೇವರು: ಹಲೋ ... ನನ್ನ ಪ್ರೀತಿಯ ...... ನೀವು ನನಗೆ ಕರೆ ಮಾಡಿದ್ದರಾ??
ನಾನು:ನಿಮಗೆ ಕರೆನಾ?... ಇಲ್ಲ.. ಯಾರು ನೀವು ?..
ದೇವರು: ಸ್ವರ್ಗದಿಂದ ದೇವರುನಿಮ್ಮ ಪ್ರಾರ್ಥನೆಗಳನ್ನು ಕೇಳಿದೆಹಾಗಾಗಿ ನಿಮ್ಮ ಜೊತೆ ಮಾತಾಡೋಣವೆಂದು ನಾನು ಭಾವಿಸಿದೆ
ನಾನು: ನಾನು ಪ್ರಾರ್ಥನೆ ಮಾಡುತ್ತೇನೆ. ನನಗೆ ಒಳ್ಳೆಯ ಅನುಭವ ಸಿಗುತ್ತದೆ. ಈಗ ವಾಸ್ತವವಾಗಿ ಯಾವುದೋ ಕೆಲಸದಲ್ಲಿ ನಿರತನಾಗಿದ್ದೇನೆ..
ದೇವರು: ನೀವು ಯಾವುದರಲ್ಲಿ ನಿರತರಾಗಿದ್ದೀರಿ ?.... ಎಲ್ಲವೂ ಕಾರ್ಯನಿರತವಾಗಿವೆ .... ಇರುವೆಗಳೂ ಸಹ ತುಂಬಾ ಕಾರ್ಯನಿರತವಾಗಿವೆ ...
ನಾನು: ಗೊತ್ತಿಲ್ಲ ..... ಆದರೆ ನನಗೆ ವಿರಾಮ ಸಿಗುತ್ತಿಲ್ಲ. ಬಿಡುವಿಲದ ಜೀವನವಾಗಿ ಮಾರ್ಪಟ್ಟಿದೆ, ಯವಾಗಲೂ ಕೆಲಸದ ದಟ್ಟಣೆಯೆ.
ದೇವರು: ಹೌದು. ಚಟುವಟಿಕೆ ನಿಮ್ಮನ್ನು ಕಾರ್ಯಪ್ರವೃತ್ತರನ್ನಾಗಿ ಮಾಡುತ್ತದೆ. ಆದರೆ ಉತ್ಪಾದಕತೆ
ಫಲಿತಾಂಶವನ್ನು ನಿಮಗೆ ಕೊಡುತ್ತದೆ. ಚಟುವಟಿಕೆ ಸಮಯ ತೆಗೆದುಕೊಳ್ಳುತ್ತದೆ. ಉತ್ಪಾದಕತೆ ಸಮಯವನ್ನು ಕಡಿಮೆಗೊಳಿಸುತ್ತದೆ.
ನಾನು: ಗೊತ್ತಾಯಿತು. ಆದರೆ ನಾನು ಇನ್ನೂ ಅದನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ..
ನೀವು ಇನ್ಸ್ಟಂಟ್ ಮೆಸೇಜಿಂಗ್ ಚಾಟಿನಲ್ಲಿ ನನ್ನನ್ನು Buzz ಮಾಡುತ್ತೀರೆಂದು ನಾನು ನಿರೀಕ್ಷಿಸಿರಲಿಲ್ಲ.
ದೇವರು:ಕೆಲವು ಸ್ಪಷ್ಟತೆ ನೀಡುವ ಮೂಲಕ, ಸಮಯಕ್ಕಾಗಿ ನಿಮ್ಮ ಹೋರಾಟವನ್ನು ಪರಿಹರಿಸಬೇಕೆಂದುಕೊಂಡಿದ್ದೆ
. ಈ ನಿವ್ವಳ ಯುಗದಲ್ಲಿ, ನಾನು ನಿಮಗೆ ಆರಾಮದಾಯಕವಾದ ಮಾಧ್ಯಮದ ಮೂಲಕ ನಿಮ್ಮನ್ನು ತಲುಪಲು ಬಯಸಿದ್ದೆ...
ನಾನು: ಈಗ ಹೇಳಿ, ಏಕೆ ಜೀವನ ಈ ರೀತಿ ಸಂಕೀರ್ಣ ಆಗಿದೆ?
ದೇವರು: ಜೀವನವನ್ನು ವಿಶ್ಲೇಷಿಸುವದನ್ನು ನಿಲ್ಲಿಸಿ ....... ಕೇವಲ ಜೀವಿಸಿ ....ವಿಶ್ಲೇಷಿಸುವುದು ಜೀವನವನ್ನು ಸಂಕೀರ್ಣ ಮಾಡುತ್ತದೆ.
ನಾನು: ಏಕೆ ನಾವು ನಿರಂತರವಾಗಿ ಅಸಂತೋಷದಿಂದ ಇರುತ್ತೇವೆ?
ದೇವರು: ನಿಮ್ಮ ಇವತ್ತು ನೀವು ನಾಳೆಯ ಬಗ್ಗೆ ಯೋಚಿಸಿದ ನಿನ್ನೆ
ನೀವು ವಿಶ್ಲೇಷಿಸುವುದರಿಂದ ನೀವು ಆತಂಕಗೊಳ್ಳುತ್ತೀರಿ.
ಆತಂಕಪಟ್ಟುಕೊಳ್ಳುವುದು ನಿಮಗೆ ಅಭ್ಯಾಸವಾಗಿಬಿಟ್ಟಿದೆ, ಹಾಗಾಗಿ ನೀವು ಸಂತೋಷವಾಗಿರುವುದಿಲ್ಲ..
ನಾನು: ಆದರೆ ತುಂಬಾ ಅನಿಶ್ಚಿತತೆ ಇದ್ದಾಗ ನಾವು ಹೇಗೆ ಚಿಂತೆಮಾಡದೇ ಇರಲು ಸಾಧ್ಯ
ದೇವರು: ಅನಿಶ್ಚಿತತೆಯು ಅನಿವಾರ್ಯ, ಆದರೆ ಆತಂಕಗೊಳ್ಳುವುದು ಐಚ್ಚಿಕ.
ನಾನು: ಆದರೂ ಸಹ, ಅನಿಶ್ಚಿತತೆ ಕಾರಣದಿಂದ ತುಂಬಾ ನೋವು ಇದೆ ..
ದೇವರು: ನೋವು ಅನಿವಾರ್ಯ, ಆದರೆ ಬಳಲುವುದು ಐಚ್ಚಿಕ.
ನಾನು: ಬಳಲುವುದು ಐಚ್ಛಿಕ ಇದ್ದರೆ, ಏಕೆ ಒಳ್ಳೆಯ ಜನರು ಯಾವಾಗಲೂ ಬಳಲುತ್ತಾರೆ ?
ದೇವರು: ವಜ್ರವನ್ನು ಘರ್ಷಣೆ ಇಲ್ಲದೆ ನಯಗೊಳಿಸಲು ಸಾಧ್ಯವಿಲ್ಲ. ಬಂಗಾರವನ್ನು
ಬೆಂಕಿ ಇಲ್ಲದೇ ಶುದ್ಧೀಕರಿಸಲು ಸಾಧ್ಯವಿಲ್ಲ. ಒಳ್ಳೆಯ ಜನರು ಪ್ರಯೋಗಕ್ಕೆ ಒಳಪಡುತ್ತಾರೆ, ಆದರೆ ಅದು ಅನುಭವಿಸುವುದಲ್ಲ. ಅನುಭವವು ನಮ್ಮ ಜೀವನನ್ನು ಉತ್ತಮಗೊಳಿಸುತ್ತದೆ ಹೊರತು ಕಹಿಯಾಗಿ ಮಾಡುವುದಿಲ್ಲ
ನಾನು: ಆದರೆ ತುಂಬಾ ಅನಿಶ್ಚಿತತೆ ಇದ್ದಾಗ ನಾವು ಹೇಗೆ ಚಿಂತೆಮಾಡದೇ ಇರಲು ಸಾಧ್ಯ
ದೇವರು: ಅನಿಶ್ಚಿತತೆಯು ಅನಿವಾರ್ಯ, ಆದರೆ ಆತಂಕಗೊಳ್ಳುವುದು ಐಚ್ಚಿಕ.
ನಾನು: ಆದರೂ ಸಹ, ಅನಿಶ್ಚಿತತೆ ಕಾರಣದಿಂದ ತುಂಬಾ ನೋವು ಇದೆ ..
ದೇವರು: ನೋವು ಅನಿವಾರ್ಯ, ಆದರೆ ಬಳಲುವುದು ಐಚ್ಚಿಕ.
ನಾನು: ಬಳಲುವುದು ಐಚ್ಛಿಕ ಇದ್ದರೆ, ಏಕೆ ಒಳ್ಳೆಯ ಜನರು ಯಾವಾಗಲೂ ಬಳಲುತ್ತಾರೆ ?
ದೇವರು: ವಜ್ರವನ್ನು ಘರ್ಷಣೆ ಇಲ್ಲದೆ ನಯಗೊಳಿಸಲು ಸಾಧ್ಯವಿಲ್ಲ. ಬಂಗಾರವನ್ನು
           ಬೆಂಕಿ ಇಲ್ಲದೇ ಶುದ್ಧೀಕರಿಸಲು ಸಾಧ್ಯವಿಲ್ಲ. ಒಳ್ಳೆಯ ಜನರು ಪ್ರಯೋಗಕ್ಕೆ ಒಳಪಡುತ್ತಾರೆ, ಆದರೆ ಅದು      ಅನುಭವಿಸುವುದಲ್ಲ.  ಅನುಭವವು ನಮ್ಮ ಜೀವನನ್ನು ಉತ್ತಮಗೊಳಿಸುತ್ತದೆ ಹೊರತು ಕಹಿಯಾಗಿ ಮಾಡುವುದಿಲ್ಲ

ನಾನು: ಆದರೆ ತುಂಬಾ ಅನಿಶ್ಚಿತತೆ ಇದ್ದಾಗ ನಾವು ಹೇಗೆ ಚಿಂತೆಮಾಡದೇ ಇರಲು ಸಾಧ್ಯ
ದೇವರು: ಅನಿಶ್ಚಿತತೆಯು ಅನಿವಾರ್ಯ, ಆದರೆ ಆತಂಕಗೊಳ್ಳುವುದು ಐಚ್ಚಿಕ.
ನಾನು: ಆದರೂ ಸಹ, ಅನಿಶ್ಚಿತತೆ ಕಾರಣದಿಂದ ತುಂಬಾ ನೋವು ಇದೆ ..
ದೇವರು: ನೋವು ಅನಿವಾರ್ಯ, ಆದರೆ ಬಳಲುವುದು ಐಚ್ಚಿಕ.
ನಾನು: ಬಳಲುವುದು ಐಚ್ಛಿಕ ಇದ್ದರೆ, ಏಕೆ ಒಳ್ಳೆಯ ಜನರು ಯಾವಾಗಲೂ ಬಳಲುತ್ತಾರೆ ?
ದೇವರು: ವಜ್ರವನ್ನು ಘರ್ಷಣೆ ಇಲ್ಲದೆ ನಯಗೊಳಿಸಲು ಸಾಧ್ಯವಿಲ್ಲ. ಬಂಗಾರವನ್ನು
ಬೆಂಕಿ ಇಲ್ಲದೇ ಶುದ್ಧೀಕರಿಸಲು ಸಾಧ್ಯವಿಲ್ಲ. ಒಳ್ಳೆಯ ಜನರು ಪ್ರಯೋಗಕ್ಕೆ ಒಳಪಡುತ್ತಾರೆ, ಆದರೆ ಅದು ಅನುಭವಿಸುವುದಲ್ಲ. ಅನುಭವವು ನಮ್ಮ ಜೀವನನ್ನು ಉತ್ತಮಗೊಳಿಸುತ್ತದೆ ಹೊರತು ಕಹಿಯಾಗಿ ಮಾಡುವುದಿಲ್ಲ
ನಾನು: ನಿಮ್ಮ ಪ್ರಕಾರ ಈ ಅನುಭವ ಉಪಯುಕ್ತವೆ ?
ದೇವರು: ಹೌದು. ಪ್ರತಿ ವಿಚಾರದಲ್ಲಿ, ಅನುಭವ ಎನ್ನುವುದು ಕಠಿಣ ಶಿಕ್ಷಕನ ಹಾಗೆ. ಮೊದಲು ಪರೀಕ್ಷೆಯನ್ನು ಇಟ್ಟು ನಂತರ ಪಾಠವನ್ನು ಕಲಿಸುತ್ತಾರೆ
ನಾನು: ಆದರೂ, ಏಕೆ ನಾವು ಇಂತಹ ಪರೀಕ್ಷೆಗಳ ಮೂಲಕ ಸಾಗಬೇಕು? ಯಾಕೆ?? ನಾವು
ಸಮಸ್ಯೆಗಳಿಂದ ಮುಕ್ತವಾಗಲು ಏಕೆ ಸಾಧ್ಯವಿಲ್ಲ ?
ದೇವರು: ತೊಂದರೆಗಳು ಪ್ರಯೋಜನಕಾರಿ ಪಾಠಗಳನ್ನು ಕಲಿಸುವ ಉದ್ದೇಶಪೂರ್ವಕ ರೋಡ್^ಬ್ಲೋಕ್..  ಇವು
 ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸುತ್ತವೆ.
ಆಂತರಿಕ ಶಕ್ತಿ ವೃದ್ದಿಸುವುದು ನೀವು ಸಮಸ್ಯೆಗಳಿಂದ ಪಾರಾದಾಗಲಲ್ಲಾ ಬದಲಾಗಿ ಹೋರಾಟ ಮತ್ತು ಧಾರಣಶಕ್ತಿ ಬರುತ್ತದೆ
ನಾನು:ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಹಲವಾರು ಸಮಸ್ಯೆಗಳ ನಡುವೆಯೂ ನಾವು ಎತ್ತ ಸಾಗುತ್ತಿದ್ದೇವೆ ಅಂತ ಗೊತ್ತಿಲ್ಲ
ದೇವರು: ನೀವು ಹೊರಗೆ ನೋಡಿದರೆ ನೀವು ಎತ್ತ ಸಾಗುತ್ತಿದ್ದೀರಿ ಎಂದು ತಿಳಿಯುವುದಿಲ್ಲ. ಒಳಗೆ ನೋಡಿ.ನಿಮ್ಮನ್ನು ನೀವೆ ನೋಡಿಕೊಳ್ಳಿ, ಹೊರಗೆ ನೋಡುತ್ತಿರುವುದು, ನಿಮ್ಮ ಕನಸಿನ ಲೋಕ. ಒಳಗೆ ನೋಡಿ, ನೀವು ಜಾಗೃತಗೊಳ್ಳುತ್ತೀರಿ
ಕಣ್ಣು ದೃಷ್ಟಿ ನೀಡುತ್ತದೆ. ಹೃದಯ ಅಂತರ್ದೃಷ್ಟಿ ನೀಡುತ್ತದೆ
ನಾನು: ಕೆಲವೊಮ್ಮೆ ಸರಿಯಾದ ದಾರಿಯಲ್ಲಿ ಹೋದರೂ ಯಶಸ್ಸು ಬೇಗ ಸಿಗದಿದ್ದಾಗ ನೋವಾಗುತ್ತದೆ. ನಾನು ಏನು ಮಾಡಬೇಕು?
ದೇವರು: ಯಶಸ್ಸು ಎಂದು ಇತರರು ನಿರ್ಧರಿಸುವ ಅಳತೆಯಾಗಿದೆ. ತೃಪ್ತಿಯ ಪ್ರಮಾಣವನ್ನು
 ನಿರ್ಧರಿಸುವವರು ನೀವು.
ಮುಂದಿನ ಸವಾರಿಯ ಬಗ್ಗೆ ತಿಳಿಯುವ ಬದಲು , ಸವಾರಿ ಮಾಡುವ ದಾರಿಯ ಬಗ್ಗೆ ತಿಳಿಯುವುದು ತೃಪ್ತಿದಾಯಕ
ನೀವು ದಿಕ್ಸೂಚಿ ಜೊತೆಗೆ ಕೆಲಸಮಾಡಿ. ಇತರರು ಗಡಿಯಾರದೊಂದಿಗೆ ಕೆಲಸ ಮಾಡಲಿ
ನಾನು: ಕಠಿಣ ಕಾಲದಲ್ಲಿ, ಪ್ರೇರಣೆ ಉಳಿಯಲು ಏನು ಮಾಡಬೇಕು ?
ದೇವರು: ಯಾವಾಗಲೂ ನೀವು ಎಷ್ಟು ದೂರ ಕ್ರಮಿಸಿದ್ದೀರಿ ಎಂದು ನೋಡಿ, ಎಷ್ಟು ದೂರ ಬಾಕಿ ಇದೆ ಎಂದು ಅಲ್ಲ... ಯಾವಾಗಲೂ ನಿಮ್ಮ ಬಳಿ ಏನು ಇದೆಯೊ ಅದರ ಬಗ್ಗೆ ಯೋಚಿಸಿ, ಇಲ್ಲದರ ಬಗ್ಗೆ ಅಲ್ಲ..
ನಾನು: ಕೆಲವೊಮ್ಮೆ ನಾನು ಯಾರು, ನಾನು ಯಾಕೆ ಇಲ್ಲಿ ಇದ್ದೇನೆ ಎಂದು ಕೇಳಿಕೊಳ್ಳುತ್ತೇನೆ. ನಾನು ಉತ್ತರ ಪಡೆಯಲು ಸಾಧ್ಯವಾಗಿಲ್ಲ
ದೇವರು: ನೀವು ಯಾರು ಎಂದು ತಿಳಿಯುವ ಬದಲು, ಆದರೆ ನೀವು ಯಾರಾಗಲು ಬಯಸುತ್ತೀರಿ ಎಂದು  ನಿರ್ಧರಿಸಿ
ಎಂದು. ಇಲ್ಲೆ ಏಕೆ ಇದ್ದೀರಿ ಎಂದು ಉದ್ದೇಶ ತಿಳಿಯುವುದನ್ನು ನಿಲ್ಲಿಸಿ. ಉದ್ದೇಶವನ್ನು ನೀವೆ ರಚಿಸಿ ಮತ್ತು ಅದರಂತೆ ಕಾರ್ಯಪ್ರವೃತ್ತರಾಗಿ. ಜೀವನ
ಆವಿಶ್ಕಾರದ ಪ್ರಕ್ರಿಯೆಅಲ್ಲ  ಆದರೆ ಸೃಷ್ಟಿಮಾಡುವ ಪ್ರಕ್ರಿಯೆ..
ನಾನು:ಜೀವನದಲ್ಲಿ ಅತ್ಯುತ್ತಮ ಗಳಿಕೆ ಪಡೆಯುವುದು ಹೇಗೆ?
ದೇವರು: ವಿಷಾದವಿಲ್ಲದೆ ನಿಮ್ಮ ಭೂತಕಾಲವನ್ನು ಎದುರಿಸಿ, ವಿಶ್ವಾಸದಿಂದ ನಿಮ್ಮ ಪ್ರಸ್ತುತವನ್ನು ನಿರ್ವಹಿಸಿ
 ಭಯ ಇಲ್ಲದೆ ಭವಿಷ್ಯದ ತಯಾರಿನಡೆಸಿ..
ನಾನು: ಒಂದು ಕೊನೆಯ ಪ್ರಶ್ನೆ.. ಕೆಲವೊಮ್ಮೆ ನನ್ನದು ಉತ್ತರವಿಲ್ಲದ ಪ್ರಾರ್ಥನೆ ಅಂತ ಅನಿಸುತ್ತದೆ??
ದೇವರು: ಉತ್ತರ್ವಿಲ್ಲದ ಪ್ರಾರ್ಥನೆಗಳೇ ಇಲ್ಲ. ಕೆಲವೊಮ್ಮೆ ಉತ್ತರ "ಇಲ್ಲ" ಅಂತಿರುತ್ತದೆ
ನಾನು: ಈ ಅದ್ಭುತ ಚರ್ಚೆಗೆ ಧನ್ಯವಾದಗಳು. ಹೊಸವರ್ಷ-೨೦೧೨ ನ್ನು ಹೊಸ ಸ್ಪೂರ್ತಿಯೊಂದಿಗೆ ಆರಂಭಿಸಿದ್ದಕ್ಕೆ ಖುಶಿಯಿದೆ
ದೇವರು: ನಂಬಿಕೆ ಇಟ್ಟುಕೊ ಮತ್ತು ಭಯವನ್ನು ಬಿಡು. ನಿಮ್ಮ ಅನುಮಾನಗಳನ್ನು ನಂಬಬೇಡಿ ಮತ್ತು ನಿಮ್ಮ ನಂಬಿಕೆಗಳನ್ನು ಅನುಮಾನಿಸಿ
                                     ಎಲ್ಲರಿಗೂ ಹೊಸವರ್ಷದ ಹಾರ್ಧಿಕ ಶುಭಾಶಯಗಳು
                                                                            ವಂದನೆಗಳೊಂದಿಗೆ
                                                                                              
                                                                                                        -ಶಿಶಿರ್..










Thursday 19 January 2012

ತಲೆದಂಡ ಅಗತ್ಯವೇ....!!!


ನನ್ನ ಬರಹ ಪಕ್ವವಾಗಲಿ ಹಾಗು ಅನುಭವ ಸಿಗಲಿ ಎಂಬ ಕಾರಣದಿಂದ ವಿಷಯವನ್ನು ತೆಗೆದುಕೊಂಡೆ, ಸಹಕರಿಸಿ

                       ತಲೆದಂಡ ಅಗತ್ಯವೇ....!!!
                   


 ಹೀನಾಯ ಸೋಲಿನ ಸುಳಿಯಲ್ಲಿ ಸಿಲುಕಿರುವ ಭಾರತ ಕ್ರಿಕೆಟ್ ತಂಡಕ್ಕೆ ಮೂವರು ಹಿರಿಯ ಆಟಗಾರರಾದ "ರಾಹುಲ್ ದ್ರಾವಿಡ್ , ಸಚಿನ್ ತೆಂಡುಲ್ಕರ್ , ಕ್ಶ್ಮಣ್ " ಇವರ ನಿವೃತ್ತಿಗೆ ಒತ್ತಾರ್ಯೆ ಕೆಲವರುಆದರೆ ಇದು ಅಗತ್ಯವೇ.. ಅದನ್ನು ತಡೆದುಕೊಳ್ಳುವ ಶಕ್ತಿ ಭಾರತ ತಂಡಕ್ಕೆ ಇದ್ಯಾ ಅಂತ ನೋಡಬೇಕು.ವಿಶ್ವದ ಅತ್ಯಂತ ಬಲಿಷ್ಟ ಬ್ಯಾಟಿಂಗ್ ಪಡೆಗಳಲ್ಲಿ ಒಂದಾಗಿರುವ ಹೊರತಾಗಿಯೂ ಸೋತು ಸುಣ್ಣವಾಗಿರುವ ಭಾರತ ತಂಡ ಇನ್ನು  ಮೊವರು ಇಲ್ಲ ಅಂತಾದರೆ ಅದರ ಪರಿಸ್ಥಿತಿಯನ್ನು ಊಹಿಸುವುದೂ ಕಷ್ಟ... ಕ್ವಿಂಟಲಗಟ್ಟಲೆ ಅನುಭವ ಹೊಡಿರುವ ಇವರೇ ವಿದೇಶದ ಅಂಕಣದಲ್ಲಿ ಬೌನ್ಸರ್ಗಳನ್ನುೆದುರಿಸಲು ಪರದಾಡಿದರೆಂದಾಮೇಲೆ ಅನನುಭವಿ ಯುವ ಆಟಗಾರರು ಏನು ತಾನೆ ಮಾಡಿಯಾರು ಎಂಬುದು ಪ್ರಶ್ನೆ.
             
 ಇನ್ನು ಹೇಳಬೇಕೆಂದರೆ ಕಳೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೇವಲ ದ್ರಾವಿಡ್ ಸರಣಿಯುದ್ದಕ್ಕೂ ಉತ್ತಮ ಪದರ್ಶನ ನೀಡಿದ್ದು ಹಾಗು ಲಕ್ಸ್ಮಣ್ ಕೊನೆಯ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದು ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವ ಪ್ರದರ್ಶನಗಳು ಬಂದಿಲ್ಲಈಗಿನ ಆಸ್ಟೇಲಿಯ ವಿರುದ್ಧದ ಸರಣಿಯಲ್ಲಿ ಸಚಿನ್     ಒಮ್ದೆರಡು ಅರ್ಧಶತಕಗಳಿಸಿದ್ದು ಬಿಟ್ಟರೆ ಬೇರಾರೂ ಅಂತಹ ಪ್ರದರ್ಶನವನ್ನು ನೀಡಿಲ್ಲ.








ಬದಲಿ ವ್ಯವಸ್ಥೆ ಇದ್ಯಾ..!!
                          
              ಆಗಲಿ ಇವರು ನೀವೃತ್ತಿ ತೆಗೆದುಕೊಂಡರು ಅಂತಲೇ ತಿಳಿದುಕೊಳ್ಳೋಣ, ಆದ್ರೆ ಇವರ ಸ್ಥಾನ ತಂಬಲು ಪರ್ಯಾಯ ಆಟಗಾರರು ತಯಾರಾಗಿದ್ದಾರಾ?? ಇವರಷ್ಟೆ 
ಬಲಿಷ್ಟವಾದತಾಂತ್ರಿಕವಾಗಿ ಸದೃಢವಾದ ಆಟಗಾರರು 
 ಈಗ ಎಲ್ಲಿದ್ದಾರೆ?? 
                 

    

       ಸಚಿನ್ ಅವರಂತ ಅಪ್ರತಿಮ ಪ್ರತಿಭೆಗೆ ಬದಲಿ ಆಟಗಾರನನ್ನ ಹುಡುಕುವುದು ದೊಡ್ಡ ವಿಚಾರವೇನಲ್ಲ ಆದರೆ 
      ಅವರ ಸ್ಥಾನಕ್ಕೆ ಅವರಷ್ಟೆ ನ್ಯಾಯ ತುಂಬುವುದು ಕನಸಿನ  ಮಾತು, ಸುಧೀರ್ಘ ೨೩ ವರ್ಷಗಳ ಕಾಲ ಸೇವೆ ನೀಡುವುದು 
       ಮುಂಬರುವ ಆಟಗಾರರಿಗೆ ಅಸಾಧ್ಯ...
            



      
                ಇನ್ನು ಕಲಾತ್ಮಕ ಆಟಗಾರ "ಲಕ್ಷ್ಮಣ್" ಸ್ಥಾನ 
       ತುಂಬುವುದು ಕಷ್ಟವೇ ಸರಿ. ನಾಲ್ಕನೇ ಇನ್ನಿಂಗ್ಸಿನ 
      ವೀರ ಎಂದೇ ಖ್ಯಾತರಾಗಿರುವ ಇವರು ನಾಲ್ಕನೆ ಇನಿಂಗ್ಸಿನಲ್ಲ
      ಅದೆಷ್ಟು ಬಾರಿ ಉತ್ತಮ ಪ್ರದರ್ಶನ ನೀಡಿ ಗೆಲ್ಲಿಸಿಕೊಟ್ಟಿಲ್ಲ ಹೇಳಿ
      ಅದೆಷ್ಟು ಪಂದ್ಯಗಳನ್ನು ಡ್ರಾ  ಮಾಡಿಸಿ ಭಾರತದ 
ಮಾನ ಉಳಿಸಿಲ್ಲ ಹೇಳಿ





ಇನ್ನೊಂದು  'ಗೋಡೆ' ಕಟ್ಟುವುದು ಅಸಾಧ್ಯದ ಮಾತು
                 
                ಭಾರತದ ಗೋಡೆ ಎಂದು ಖ್ಯಾತಿ ಹೊಂದಿರುವ ರಾಹುಲ್ ದ್ರಾವಿಡ್  ಅವರಿಗೆ ಬದಲಿ ಆಟಗಾರನನ್ನು ಹುಡುಕುವುದು ಕನಸಿನ ಮಾತೇ ಸರಿ
     ಏಕೆಂದರೆ ದ್ರಾವಿಡ್ ಕೇವಲ ಅತ್ಯದ್ಭುತ ಬ್ಯಾಟ್ಸ್ಮನ್ ಅಷ್ಟೇ ಅಲ್ಲ.. ಅನುಭವಿ ಮಾಜಿ ನಾಯಕ,ಗೂಟ ರಕ್ಷಕ, ಅತಿ ಹೆಚ್ಚು ಕ್ಯಾಚ್ ಪಡೆದು ಧಾಖಲೆ ಮಾಡಿರುವ ಒಳ್ಳೆಯ ಸ್ಲಿಪ್ ವಿಭಾಗದ ಕ್ಷೇತ್ರರಕ್ಷಕ.. ಬಹುತೇಕ ಎಲ್ಲ ಕಮಾಂಕದಲ್ಲೂ ಆಡಿದ ಅನುಭವ ಇದೆ ದ್ರಾವಿಡ್ ಅವರಿಗೆ..

ಈಗ ಸ್ವಲ್ಪ ಹಿಂದೆ ಹೋಗೋಣ...

              ೨೦೦೮ರಲ್ಲಿ ಗಂಗೂಲಿ ಅವರನ್ನು ಹೊರದಬ್ಬಿದ ಬಿಸಿಸಿಐ
ಅವರಿಂದ ತೆರವಾದ ಸ್ಥಾನವನ್ನು ತುಂಬಲೂ ಇಂದಿಗೂ ಸಹ
ತಿಣುಕಾಡುತ್ತಿದೆ, ಈಗಾಗಲೆ ಐವರು (ಯುವರಾಜ್,ಚೇತೆಶ್ವರ್,
ಕೊಹ್ಲಿ,ದಿನೇಶ್ ಕಾರ್ತಿಕ್,ರೈನಾ) ಆಟಗಾರರು ತಂಡಕ್ಕೆ 
ಬಂದರೂ ಒಬ್ಬರ ಸ್ಥಾನವು ಭದ್ರವಾಗಿಲ್ಲ..

               ಕೇವಲ ಒಂದು ಸ್ಥಾನವನ್ನು ತುಂಬಲು ಸಾಧ್ಯವಾಗದೆ 
ಇದ್ದಾಗ, ಒಮ್ಮಿಂದೊಮ್ಮೆ ಮೂವರು ದಿಗ್ಗಜರ ಸ್ಥಾನವನ್ನು ತುಂಬುವುದು 'ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿದಷ್ಟೆ' ಸತ್ಯಕ್ಕೆ ಹತ್ತಿರ.... :ಪ್
           
                ಹಿರಿಯರ ಕಳಪೆ ಪ್ರದರ್ಶನ ಅಂತ ಏನು ಹೇಳುತ್ತಿದ್ದಾರೋ.. ಇದೇ ಅಂತಿಮವಲ್ಲ... ಎಲ್ಲರಿಗೂ ಕೆಟ್ಟ ಕಾಲ ಬಂದೇ ಬರುತ್ತದೆ ಹಾಗೆಯೆ ಒಳ್ಳೆಯ ಕಾಲವು ಬರುತ್ತದೆ. ಇವರಿಗೆ ಇನ್ನು ಕೆಲವು ವರ್ಷಗಳ ಕಾಲ ಆಡುವ ಶಕ್ತಿಯಿದೆ ಆಡಲಿ ಬಿಡಿ

                ಅಲ್ಲಿಯ ತನಕ ಯುವ ಆಟಗಾರರನು ತಯಾರು ಮಾಡಬೇಕು, ಪ್ರಥಮ ದರ್ಜೆ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡುವ , ಹೆಚ್ಚಿಗೆ ಸಮಯ ಅಂಕಣದಲ್ಲಿ ನಿಲ್ಲುವ, ಕಲೆಯಲ್ಲಿ ಪಕ್ವವಾಗಿರುವ , ತಾಂತ್ರಿಕವಾಗಿ ಸಧೃಢವಾಗಿರುವ  - ಆಟಗಾರರನ್ನು ಹುಡುಕಿಟ್ಟುಕೊಳ್ಳಬೇಕು

               ನಂತರ ಹಂತಂತವಾಗಿ ಒಬ್ಬೊಬ್ಬರನ್ನಾಗಿ ತಂಡದಲ್ಲಿ ಬದಲಾವಣೆ ಮಾಡುತ್ತ ಹೊಸ ತಂಡವನ್ನು ಕಟ್ಟಬೇಕು. ಆಗ ಯಶಸ್ಸು ದೊರಕುತ್ತದೆ. ಅದು ಬಿಟ್ಟು ಆಯ್ಕೆ ಸಂಧರ್ಬದಲ್ಲಿ ರಾಜಕೀಯ ಮಾಡುತ್ತಾ, ಕ್ವೋಟಾ ಆಧಾರದ ಮೇಲೆ ಅವಕಾಶ ನೀಡುತ್ತಾ ಹೋದರೆ ಕೇವಲ ಬಿಸಿಸಿಐ ಉದ್ಧಾರ ಆಗುತ್ತದೆಯೆ ಹೊರತು ಭಾರತ ಕ್ರಿಕೆಟ್ ಅಲ್ಲ..!
                                                      
                                                                      -ಶಿಶಿರ್..